Saturday, 14 June 2008


ಮಂಕು ಬಡಿದವರ ನಡುವೆ...


ಬಹುಶಃ ಭಾರತದಲ್ಲಿ ಭಯೋತ್ಪಾದೆ ಅಟ್ಟಹಾಸಕ್ಕೆ ಕೊನೆಯಿಲ್ಲ ಎಂಬುದು ದೃಢವಾಗುತ್ತಿದೆ. ಇತ್ತೀಚೆಗಿನ ಜೈಪುರ ಸ್ಫೋಟ, ಅದಾದ ನಂತರದ ಕೆಲವೇ ದಿನಗಳಲ್ಲಿ ರಾಜಧಾನಿ ನವದೆಹಲಿಯಲ್ಲಿ ಅಬ್ದುಲ್ ರೆಹಮಾನ್ ಎಂಬ ಬಾಂಗ್ಲಾದೇಶೀ ಮೂಲದ ಹುಜಿ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದ ಕಾರ್ಯಕರ್ತನನ್ನು ಬಂಧಿಸಲಾಯಿತು. ಆ ಸಂದರ್ಭದಲ್ಲಿ ಇಡೀ ದೆಹಲಿಯೇ ಅಚ್ಚರಿ ವ್ಯಕ್ತಪಡಿಸಿದ್ದು ತಿಳಿದೇ ಇದೆ. ನಿಜಹೇಳಬೇಕೆಂದರೆ ನವ ದೆಹಲಿ ರೈಲ್ವೇ ನಿಲ್ದಾಣದ ಚೆಲ್ಮ್ಸ್‌ಫರ್ಡ್ ರಸ್ತೆ ಬಳಿ ಆತನನ್ನು ಪೊಲೀಸರು ಸೆರೆಹಿಡಿದಿದ್ದು ಮಾತ್ರವಲ್ಲ, ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಲು ಹುನ್ನಾರ ನಡೆಸಿದ್ದ ಹುಜಿ ಸಂಘಟನೆಯ ಕೃತ್ಯಕ್ಕೂ ಪೊಲೀಸರು ಕತ್ತರಿ ಹಾಕಿದ್ದರು. ಇಲ್ಲದಿದ್ದಲ್ಲಿ ದೆಹಲಿಯೂ ಸ್ಫೋಟದ ಎಲ್ಲಾ ಸಾಧ್ಯತೆಗಳೂ ಇದ್ದವು.
ಇಂದು ಭಯೋತ್ಪಾದಕರ ಮೂಲ ಗುರಿ ಅಮೆರಿಕನ್ನರನ್ನು ಹತ್ತಿಕ್ಕುವಲ್ಲಿ ಆಗಿದ್ದರೂ, ಭಾರತ ಮಾತ್ರ ಭಯೋತ್ಪಾದಕರ ದಾಳದಲ್ಲಿ ಸಿಲುಕಿ ನರಳಾಡುತ್ತಿದೆ. ಭದ್ರತೆ ಹಾಗೂ ರಾಷ್ಟ್ರ ರಕ್ಷಣಾ ವಿಷಯದಲ್ಲಿ ಅಮೆರಿಕಕ್ಕೆ ಸರಿಸಾಟಿ ಯಾರೂ ಇಲ್ಲ. ಆದರೆ ಅದೇ ವಿಷಯ ಭಾರತಕ್ಕೆ ಹೋಲಿಸಿದಾಗ ಫಲಿತಾಂಶ ವ್ಯತಿರಿಕ್ತ. ನಮ್ಮ ರಾಜಕಾರಣಿಗಳಿಗೆ ರಾಷ್ಟ್ರದ ರಕ್ಷಣೆ ಆಗಲಿ ಅಥವಾ ಅಮಾಯಕ ನಾಗರಿಕರ ಹತ್ಯೆ ಎಂದಿಗೂ ಗಮನಿಸಬೇಕಾದ ಅಂಶ ಆಗಿಲ್ಲ. ವೋಟ್ ಬ್ಯಾಂಕ್ ರಾಜಕಾರಣವನ್ನು ಮಾತ್ರ ಮನದಲ್ಲಿಟ್ಟುಕೊಂಡು, ಅಲ್ಪಸಂಖ್ಯಾತರ ಓಲೈಕೆಯಲ್ಲೇ ಮಂತ್ರಿಗಳು (ಶಿವರಾಜ್ ಪಾಟಿಲ್) ಕಾಲ ಕಳೆಯುತ್ತಿದ್ದಾರೆ. ಇಡೀ ಗೃಹಸಚಿವಾಲಯ ಮಾತ್ರ ಕುಂಭಕರ್ಣ ನಿದ್ದೆಯಲ್ಲೇ ದಿನ ದೂಡುತ್ತಿದೆ. ಸಮರ್ಪಕ ರಣತಂತ್ರಗಳ ಮೂಲಕ ಭಯೋತ್ಪಾದಕರ ಕಾಟ ಹತ್ತಿಕ್ಕುವಲ್ಲಿ ಗೃಹ ಸಚಿವರು ಸೋತಿದ್ದಾರೆ. ಆ ಮಧ್ಯೆಯೂ ಅಬು ಸಲೇಂನಂತಹ ಉಗ್ರರನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ, ಇದರಿಂದ ಸರಬ್‌ಜಿತ್‌ನನ್ನು ಭಾರತಕ್ಕೆ ಕರೆತರುವ ವಿಷಯದಲ್ಲಿ ಹಿನ್ನಡೆಯುಂಟಾಗುತ್ತದೆ ಎಂಬೆಲ್ಲಾ ಜಾರಿಕೊಳ್ಳುವ 'ಸ್ಪಷ್ಟನೆ ನೀಡುತ್ತಾರೆ' ನಮ್ಮ ಮಹಾನ್ ಗೃಹ ಸಚಿವರು.
ಇನ್ನು ಬಾಂಗ್ಲಾದಿಂದ ಭಾರತಕ್ಕೆ ಬರುವ ಅಕ್ರಮ ವಲಸಿಗರು ದೇಶಕ್ಕೆ ಮಾರಣಾಂತಿಕವಾಗಿ ಪರಿಣಮಿಸುತ್ತಿರುವುದು ಯಾರಿಗೂ ಘೋರ ವಿಷಯವಾಗಿ ಪರಿಣಮಿಸಿಯೇ ಇಲ್ಲ. ಇಂದು ರಾಜಸ್ಥಾನದಲ್ಲಿ ಒಂದು ಅಂದಾಜಿನ ಪ್ರಕಾರ ೧೦ ಲಕ್ಷ ಬಾಂಗ್ಲಾ ದೇಶದ ಮಂದಿ ನೆಲೆಸಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಇಂತವರನ್ನು ದೇಶದಿಂದ ಮೊದಲು ಓಡಿಸಬೇಕು ಎಂದು ವಾದಿಸುತ್ತಿರವವರ ವಾದವೆಲ್ಲಾ ಪೊಳ್ಳು ಎಂದು ಮಾನವ ಹಕ್ಕುಗಳ ಆಯೋಗದ ಮಂದಿ ವಾದಿಸುತ್ತಾರೆ. ನಫೀಸಾ ಅಲಿ ಅವರಂತಹ 'ಸಮಾಜ ಸುಧಾರಕಿ'ಯರು ಬೇರೆ ದೇಶದ ಮೂಲಸೌಕರ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು ಎಂದು ಉದಾರವಾದ ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ದೇಶ ಇಂದು ದುರಂತಗಳ ಗೂಡಾಗಿದ್ದು, ಮೂಲ ಸೌಕರ್ಯ ಬಿಡಿ, ತುತ್ತಿನ ಚೀಲ ತುಂಬಿಸಲೇ ಜನ ಹೆಣಗಾಡುತ್ತಿರುವಾಗ, ನಮ್ಮ ದೇಶದ ದುರವಸ್ಥೆಯನ್ನು ದೂರಮಾಡುವತ್ತ ಕಾರ್ಯೋನ್ಮುಖವಾಗಬೇಕು ಎಂದು ಅವರಿಗೆ ಅನ್ನಿಸುವುದೇ ಇಲ್ಲ. ಏಕೆಂದರೆ ಇವರು 'ಸಮಾಜ ಸುಧಾರಕರು' ಅಲ್ಲವೇ? ಇನ್ನು ನಮ್ಮ ಮಾನವ ಹಕ್ಕು ಆಯೋಗಕ್ಕೆ ಯಾವ ರೀತಿಯಲ್ಲಿ ಮಂಕು ಬಡಿದಿದೆ ಎಂದು ಅರ್ಥವೇ ಆಗುತ್ತಿಲ್ಲ. ಭಾರತದಲ್ಲಿ ಮಹಾದುರಂತಗಳಿಗೆ ನಾಂದಿ ಹಾಡಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಬಾಂಗ್ಲಾ ದೇಶದ ಉಗ್ರರ ಕೈವಾಡವಿದೆ ಎಂದು ಇಂಟೆಲಿಜೆನ್ಸ್ ಏಜೆನ್ಸಿ ವರದಿ ನೀಡಿದ್ದರೂ ಅದನ್ನು ಮಾನ ಹಕ್ಕುಗಳು ಒಪ್ಪುವ ಸ್ಥಿತಿಯಲ್ಲಿಲ್ಲ. ಇಂಟೆಲಿಜೆನ್ಸ್ ವರದಿ ಯಾವ ಆಧಾರದ ಮೇಲೆ ಈ ವರದಿಗಳನ್ನು ತಯಾರಿಸಿದೆಯೋ ಗೊತ್ತಿಲ್ಲ. ಇದಕ್ಕೆ ಸರಿಯಾದ ಆಧಾರವೂ ಇಲ್ಲ ಎಂದು ಮಾನವ ಹಕ್ಕು ಆಯೋಗದ 'ಮಹಾಪುರುಷ'ರೊಬ್ಬರು ಹೇಳುತ್ತಾರೆ. ಅದೇನೆ ಇರಲಿ, ಹೀಗೆಯೇ 'ದಿವ್ಯ ನಿರ್ಲಕ್ಷ' ವಹಿಸಿದಲ್ಲಿ ಒಂದಲ್ಲಾ ಒಂದು ದಿನ ನಾವೆಲ್ಲರೂ ಇದರ ನೇರ ಪರಿಣಾಮವನ್ನು ಅನುಭವಿಸಲೇ ಬೇಕು. ಈ ಅನುಭವ ಈಗ ಆಗುತ್ತಲೂ ಇದೆ.
ವಿಪರ್ಯಾಸ ಏನೆಂದರೆ ಭಯೋತ್ಪಾದನೆಯಿಂದಾಗಿ ದೇಶದ ಬಹುಭಾಗ ಇಂದು ತತ್ತರಿಸಿ ಹೋಗಿದ್ದರೂ ನಮ್ಮ ಫುಡಾರಿಗಳಿಗೆ ವಿಶೇಷ 'ಆಂಟಿ ಟೆರರಿಸಂ' ಕಾನೂನು ಒಂದನ್ನು ರಚಿಸಬೇಕೆಂದು ಅನ್ನಿಸಿಯೇ ಇಲ್ಲ. ನಿಜಹೇಳಬೇಕೆಂದರೆ ಭಯೋತ್ಪಾದನೆಯನ್ನು ತಡೆಗಟ್ಟಲು ಸಮರ್ಪಕ ರಣತಂತ್ರಗಳನ್ನು ಹೂಡಲೇ ಕೇಂದ್ರ ತಡಕಾಡುತ್ತಿದೆ. ಬಹುತೇಕ ಯುವಕರು ಜಿಹಾದಿ ಜಾಲದಲ್ಲಿ ಸೇರಿಕೊಂಡು ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದರೂ ನಾವಿನ್ನೂ ಏಕೆ ಎಚ್ಚೆತ್ತುಕೊಂಡಿಲ್ಲ? ಇಷ್ಟೆಲ್ಲಾ ಅನಾಹುತಗಳಾಗಿ, ಮುಂಬರುವ ದುರಂತಗಳನ್ನಾದರೂ ತಪ್ಪಿಸುವ ನಿಟ್ಟಿನಲ್ಲಿ ಪೋಟಾ (ಪ್ರಿವೆನ್ಷನ್ ಆಫ್ ಟೆರರಿಸಂ ಆಕ್ಟ್) ಕಾಯ್ದೆ ಜಾರಿಗೆ ತರಬಹುದಲ್ಲವೇ?
ಇವೆಲ್ಲದರ ನಡುವೆ ಜಾಗತಿಕ ಶಾಂತಿಯ ನೆಲೆಯಿಂದ ಇಸ್ಲಾಮಿಕ್ ಸಂಸ್ಥೆಗಳಲ್ಲಿ ಒಂದಾದ 'ಜಾಮಿಯಾತ್ ಉಲಾಮ-ಇ-ಹಿಂದ್' ಕೆಲವು ಇತರ ಮುಸ್ಲಿಂ ಸಂಸ್ಥೆಗಳೊಂದಿಗೆ ಭಯೋತ್ಪಾದನೆ ವಿರುದ್ಧ 'ಫತ್ವಾ' ಹೊರಡಿಸಿದ್ದೂ ನಿಜಕ್ಕೂ ಸಂತೋಷದ ವಿಷಯ. ಭಯೋತ್ಪಾದನಾ ಕೃತ್ಯಕ್ಕೆ ಕೇವಲ ಮುಸ್ಲಿಮರನ್ನು ದೂರುವುದು ತಪ್ಪು. ಸಮುದಾಯದ ಇನ್ಯಾರೋ ಕೆಲವರು ಮಾಡಿದ ದುಷ್ಕೃತಕ್ಕೆ ಇಡೀ ಸಮುದಾಯದ ವಿರುದ್ಧವೇ ಆರೊಪ ಹೂಡುವುದು ಪ್ರಜ್ಞಾವಂತ ನಡೆ ಅಲ್ಲ. ಇದರ ಹಿಂದೆ 'ಕಾಣದ ಕೈ'ಗಳೂ ಇರುತ್ತವೆ ಎಂಬುದನ್ನು ನಾವಿಲ್ಲಿ ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಮೂಢನಂಬಿಕೆಗಳಿಂದ ಹೊರಬರಬೇಕು. ಧರ್ಮದ ಹೆಸರಲ್ಲಿ ಇವರು ಧರ್ಮ ಹಾಗೂ ಸಮಾಜ ರಕ್ಷಣೆ ಮಾಡುತ್ತಿದ್ದಾರೆ ಎಂಬುದು ಹಾಸ್ಯಾಸ್ಪದ.
ಒಟ್ಟಾರೆ ನಮ್ಮೊಳಗಿನ ಲೋಪ-ದೋಷಗಳನ್ನು ತಿದ್ದಿಕೊಂಡು, ಸಮರ್ಪಕ ರಣತಂತ್ರಗಳ ಮೂಲಕ ಭಯೋತ್ಪಾದನೆಯ ಮೂಲೋಚ್ಛಾಟನೆ ಸಾಧ್ಯ. ನಮ್ಮ ಜನರ ಅಭಿವೃದ್ಧಿ, ಮೂಲ ಸೌಕರ್ಯಗಳ ಕೊರತೆ ನೀಗಿಸಿ ಸಮಾಜ ರಕ್ಷಣೆಯ ಕಾರ್ಯಕ್ಕೆ ಎಲ್ಲರೂ ಕೈಹಾಕಬೇಕು. ಬೇರೆ ದೇಶದ ಮೂಲ ಸೌಕರ್ಯ ಸರಿ ಪಡಿಸಬೇಕು ಸರಿ, ಆದರೆ ನಮ್ಮ ವ್ಯವಸ್ಥೆಯೇ ಸರಿ ಇಲ್ಲ. ನಮ್ಮಲ್ಲೇ ಕೊರತೆಗಳನ್ನಿಟ್ಟುಕೊಂಡು ಬೇರೆ ದೇಶ ಉದ್ಧಾರ ಮಾಡುತ್ತೇನೆ ಎಂದು ಹೊರಟರೆ, ಅದಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ನಫೀಸಾ ಅಲಿ ಹಾಗೂ ಮಾನವ ಹಕ್ಕುಗಳಿಗೆ ಇದು ಅರ್ಥವಾದರೆ ಸಾಕು.

Thursday, 27 March 2008

ಈತನಿಗೆ ಇನ್ನಾರು ಸಾಟಿ?

ಕನ್ನಡದ ಕಂಪು ಅವರ ಹೃದಯದಲ್ಲೇ ಬೇರೂರಿತ್ತು. ಕನ್ನಡ ಭಾಷೆಯಲ್ಲಿ ಅವರಿಗಿದ್ದ ಹಿಡಿತವನ್ನು ಕಂಡೇ ನಾನಂದು ನಿಬ್ಬರಗಾಗಿದ್ದೆ. ಕನ್ನಡ ಭಾಷೆಯನ್ನು ಬಲ್ಲವ ಸುಲಲಿತವಾಗಿ ಕನ್ನಡ ಮಾತನಾಡಿದರೆ ಅದರಲ್ಲಿ ಅಂಥದ್ದೇನೂ ವಿಶೇಷ ಇಲ್ಲ ಬಿಡಿ ಎಂದನಿಸುವುದು ನಿಜ. ಆದರೆ ನಾನೀಗ ಹೇಳಲು ಹೊರಟಿರುವುದು ಒಬ್ಬ ಕನ್ನಡಿಗನ ಕುರಿತಾಗಿಯಂತೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವರು ಒಬ್ಬ ಭಾರತದವರೇ ಅಲ್ಲ! ಅವರು ಸದ್ಯ ಇರುವುದು ಜರ್ಮನಿಯಲ್ಲಿ. ಹೊರದೇಶದವರಾಗಿದ್ದರೂ, ವಿಶೇಷವಾಗಿ ಹೇಳಬೇಕೆಂದರೆ ಭಾರತದ ಸಂಸ್ಕೃತಿ, ಸಂಪ್ರದಾಯ, ಭಾಷೆ, ನುಡಿ-ನಾಡು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕನ್ನಡ ಭಾಷೆಯನ್ನು ಅರಳು ಹುರಿದಂತೆ ಮಾತನಾಡುವ ಅವರು ಕನ್ನಡ ನಾಡಿನ ಹಿರಿ-ಕಿರಿಯ ಸಾಹಿತಿಗಳು ಹಾಗೂ ಅವರ ಕುರಿತಾಗಿ ಹೆಚ್ಚಿನದೆಲ್ಲವನ್ನೂ ತಿಳಿದುಕೊಂಡಿದ್ದಾರೆ. ಕನ್ನಡ ಸಾಹಿತ್ಯ ಅವರ ನಾಲಿಗೆಯಲ್ಲಿ ಸತ್ವಯುತವಾಗಿ ಹರಿದಾಡುತ್ತಿದೆ! ಅವರ ಮಹತ್ಸಾಧನೆಗಳ ಬಗ್ಗೆ ಇಣುಕು ಹಾಕುತ್ತಾ ಹೋದರೆ ಇನ್ನೂ ಒಂದು ಆಶ್ಚರ್ಯಕಾರಿ ಸತ್ಯ ನಿಮ್ಮ ಕಣ್ಮುಂದೆ ಬಂದು ಕುಳಿತುಕೊಳ್ಳುತ್ತದೆ. ಹೌದು, ಅವರು ಕನ್ನಡ ಭಾಷೆಯಲ್ಲೇ ಡಾಕ್ಟರೇಟ್ ಪದವಿ ಗಳಿಸಿದ್ದಾರೆ!!
ಹೆಸರು ರಾಬರ್ಟ್ ಜೆಯ್ದೆನ್ ಬೊಸ್. ದೇಶ ನೆದರ್ ಲ್ಯಾಂಡ್(ಹಾಲೆಂಡ್). ಹುಟ್ಟಿದ್ದು ಕೆನಡಾದಲ್ಲಿ. ತಂದೆ ಹಾಲೆಂಡ್ನವರಾದರೆ ತಾಯಿ ಇಂಡೋನೇಷಿಯಾದವರು. ಸರಿ, ಮೂರು ದೇಶಗಳ ರಕ್ತ ಅವರ ದೇಹದಲ್ಲಿ ಹರಿಯುತ್ತಿದ್ದರೂ, ಅವರ ಮೈಯಲ್ಲಿ ಕನ್ನಡದ ರಕ್ತ ಪ್ರಕಾಶಮಾನವಾಗಿ ಮಿಂಚುತ್ತಿದೆ ಎನ್ನಲಡ್ಡಿಯಿಲ್ಲ ಬಿಡಿ. ಕಳೆದ ವರ್ಷ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಈ ವ್ಯಕ್ತಿಯ ಜೊತೆ ಮಾತನಾಡುವ ಭಾಗ್ಯ ನನ್ನದಾಗಿತ್ತು. ಒಂದೇ ಸಮನೆ ಕನ್ನಡದಲ್ಲಿ ಉಸುರುತ್ತಿದ್ದ ಅವರ ಮಾತುಗಳೇ ನನ್ನ ಹುಬ್ಬೇರಿಸುವಂತೆ ಮಾಡಿತ್ತು.
ರಾಬರ್ಟ್ ಅವರು ಜೈನ ಧರ್ಮಕ್ಕೆ ಮತಾಂತರ ಹೊಂದಿದ ವ್ಯಕ್ತಿ. ಜೈನ ಧರ್ಮದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಅಭಿಲಾಷೆ ಅವರದ್ದು. ಪ್ರಸ್ತುತ ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಧಾರ್ಮಿಕ ದಾರ್ಶನಿಕತೆಗಳ ಅಡಿಪಾಯವಿರುವ ``ಇಂದಾಲಜಿ'' ಎಂಬ ವಿಷಯದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ವೀರಶೈವ, ಜೈನತತ್ವಗಳ ಬಗ್ಗೆ ಅತಿಯಾದ ಆಸಕ್ತಿ ಹಾಗೂ ಗೌರವ ಹೊಂದಿದ್ದಾರೆ.
ಜರ್ಮನಿಯ ಮ್ಯೂನಿಕ್ನಲ್ಲಿ 1989ರಂದು ``ಕನ್ನಡ ಗದ್ಯ ಸಾಹಿತ್ಯದಲ್ಲಿ ಇರುವ ಸಂಸ್ಕೃತಿಯ ವೈಶಿಷ್ಟ್ಯದ ಕಥಾವಸ್ತುಗಳು'' ಎಂಬ ವಿಷಯದ ಕುರಿತು ಡಾಕ್ಟರೇಟ್ ಪದವಿ ಗಳಿಸಿದ ಅವರು, ಹಾಲೆಂಡ್ ನ ಯೂಟ್ರೆಕ್ಟ್ನಲ್ಲಿ ಇದ್ದ ಕೋಟದ ಪರಮೇಶ್ವರ ಐತಾಳ್ ಅವರಿಂದ ಕನ್ನಡ ಅಭ್ಯಸಿಸಿದರು. ಜೈನ ಧರ್ಮದ ಮೇಲಿನ ಆಸಕ್ತಿ ಅವರನ್ನು ಜೈನ ಧರ್ಮವನ್ನು ಕಲಿಯಲು ಪ್ರೇರೇಪಿಸಿತು.
ಶಿವರಾಮ ಕಾರಂತರ ''ಮೂಕಜ್ಜಿಯ ಕನಸುಗಳು'', ''ಹುಚ್ಚುಮನಸ್ಸಿನ ಹತ್ತುಮುಖಗಳು'', ''ಮೈಮನಗಳ ಸುಳಿಯಲ್ಲಿ'', ಕೃತಿಗಳನ್ನು ಎಂದು ಎದೆಯುಬ್ಬಿಸಿ ಹೇಳುವ ರಾಬರ್ಟ್ ಅವರಿಗೆ ಕಾರಂತರ ''ಚೋಮನ ದುಡಿ'' ಹೃದಯಕ್ಕೆ ಬಾರೀ ಹತ್ತಿರವಾಗಿದೆಯಂತೆ. ಹೌದು, ಕಾರಂತರ ಕಾದಂಬರಿಗಳೆಂದರೇ ಎಂಥವರೂ ಪ್ರೀತಿಸುತ್ತಾರೆ ಅಲ್ಲವೇ.
''ಕನ್ನಡ ಮಾತನಾಡುವಾಗ ಅಥವಾ ಬರೆಯುವಾಗ ನಾನು ಹಾ.ಮಾ. ನಾಯಕರ ಬಳಿ ಹೋಗುತ್ತಿದ್ದೆ. ನಾನು ಇಂದು ಈ ಇಷ್ಟು ಕನ್ನಡ ಮಾತನಾಡುತ್ತೇನೆ ಎಂದರೆ ಅದರಲ್ಲಿ ನಾಯಕರ ಪಾತ್ರ ಬಹುಮುಖ್ಯವಾದುದು'' ಎಂದು ನಗು ನಗುತ್ತಾ ಅತ್ಯಂತ ಖುಷಿಯಿಂದ ಅವರು ಹೇಳುತ್ತಿದ್ದಾಗ, ಅಯ್ಯೋ, ನನ್ನ ಕನ್ನಡ ಮಾಷ್ಟ್ರು ಇವರೇ ಆಗಬಾರದೇ ಎಂದು ನನಗನಿಸಿದ್ದು ಖಂಡಿತಾ ಸುಳ್ಳಲ್ಲ!
ಒಟ್ಟು ಒಂಭತ್ತು ಭಾಷೆಗಳಲ್ಲಿ ಹಿಡಿತ ಸಾಧಿಸಿರುವ ಇವರಿಗೆ, ಸಂಸ್ಕೃತ, ಕನ್ನಡ, ಪ್ರಾಕೃತ, ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ಉರ್ದು ಹಾಗೂ ಪಾಲಿ ಭಾಷೆಗಳನ್ನು ಮಾತನಾಡುತ್ತಾರೆ. ನಾನು ತುಳುನಾಡಿನವನಾದ್ದರಿಂದ, ತುಳು ಬರುತ್ತಾ ಎಂದು ಕೇಳಿದರೆ, ``ಒಂತೆ ಒಂತೆ ಬರ್ಪುಂಡು, ಆಂಡ ಪಾತೆರುಜಿ ಆತೆ'' ಎಂದು ಮುಗುಳ್ನಗಬೇಕೆ??
ಇಂದಿನ ಆಧುನಿಕ ಯುಗದಲ್ಲೂ ನಮ್ಮಲ್ಲಿ ಸಾಂಪ್ರದಾಯಿಕ ಮಡಿವಂತರಿಗೇನೂ ಕಡಿಮೆ ಇಲ್ಲ ಬಿಡಿ. ತಮ್ಮದೇ ಆದ ವಿಚಿತ್ರ ಕಟ್ಟುಪಾಡುಗಳನ್ನು ಈಗಲೂ ಅನುಸರಿಕೊಂಡು ಹೋಗುತ್ತಿರುವರು ನಮ್ಮ ನಡುವೆಯೇ ಇದ್ದಾರೆ. ಇಂಥವರಿಂದ ಸಮಾಜದ ಕೆಳವರ್ಗದ ಹಾಗೂ ಇನ್ನಿತರ ವರ್ಗದ ಜನರು ಇಂದಿಗೂ ನೋವನ್ನು ಅನುಭವಿಸುವುದು ಇದ್ದದ್ದೇ. ಅಂತರಂಗದ ಮಡಿವಂತಿಕೆಯನ್ನು ಕಾಯ್ದುಕೊಳ್ಳದಿದ್ದರೂ, ತೋರಿಕೆಯ ಮಡಿವಂತಿಗೆ ದುಂಬಾಲು ಬಿದ್ದು ಸಾಮಾನ್ಯ ವರ್ಗದವರನ್ನು ನೀಚ ದೃಷ್ಟಿಯಿಂದ ಕಾಣುವ 'ಸ್ವಯಂಘೋಷಿತ' ಮಡಿವಂತರಿಂದ ರಾಬರ್ಟ್ ಅವರಿಗೂ ನೋವುಂಟಾಗಿದೆ! ಆದರೆ ಇವರಿಗೆ ಆದದ್ದು ಕೊಂಚ ಬೇರೆ ರೀತಿಯ ಅನುಭವ.
ಒಮ್ಮೆ ಮಾಧ್ವ ಸಿದ್ಧಾಂತದ ಕುರಿತು ಅವರು ಮಾತನಾಡುತ್ತಿದ್ದಾಗ, ಕೆಲವು ಸಾಂಪ್ರದಾಯಿಕ ಮಡಿವಂತರು, ''ಮುಂದಿನ ಜನ್ಮದಲ್ಲಿ ನೀವು ಮಾಧ್ವರಾಗಿ ಹುಟ್ಟಿಬನ್ನಿ. ಆಮೇಲೆ ಮಾಧ್ವ ಸಿದ್ಧಾಂತದ ಕುರಿತು ಮಾತನಾಡುವಿರಂತೆ'' ಎಂದು ತೆಗಳಿದ್ದನ್ನು ಅತ್ಯಂತ ಬೇಸರದಿಂದ ಹೇಳುತ್ತಾರೆ.
ಒಬ್ಬ ವ್ಯಕ್ತಿ ಒಂದು ವಿಷಯದ ಬಗ್ಗೆ ಕಲಿಯಲು ಆಸಕ್ತಿ ತೋರಿತಾಗ ಆತನ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕೆ ಹೊರತು, ಈ ರೀತಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದಾಗ, ನಿರಾಶೆ ಹಾಗೂ ಕೊರಗು ಅವರ ಮೊಗದಲ್ಲಿ ಅಚ್ಚೊತ್ತಿ ಕೂತಿತ್ತು.
ಅದೇನೆ ಇರಲಿ, ವಿದೇಶಿಗನೊಬ್ಬ ಕನ್ನಡವನ್ನು ಇಷ್ಟು ಸುಂದರವಾಗಿ, ಸ್ವಚ್ಛಂದವಾಗಿ, ಅಷ್ಟೇ ಕೋಮಲ ಧ್ವನಿಯಿಂದ ಮಾತನಾಡುತ್ತಾನೆ ಎಂದಾದರೆ, ನಮ್ಮ ನಡವಳಿಕೆ ಬಗ್ಗೆ ಪ್ರಶ್ನೆ ಮೂಡದೆ ಖಂಡಿತಾ ಇರದು. ಕನ್ನಡ ನಮ್ಮ ಮಾತೃಭಾಷೆ. ಆದರೆ ಪಾಶ್ಚಾತ್ಯರ ಇಂಗ್ಲಿಷ್ ಭಾಷೆಗೆ ನಾವು ಸೋತಾಗಿದೆ. ಹೌದು, ಇಂದು ಇಂಗ್ಲಿಷ್ ಬೇಕು. ಆದರೆ ನಮಗೆ, ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದರೂ ನಾವು ಕಣ್ಮುಚ್ಚಿ ಕುಳಿತಿದ್ದೇವೆ ಎಂದರೆ ಅದಕ್ಕೆ ಏನನ್ನಬೇಕು? ಇದು ನಮ್ಮ ಸ್ವಂತಿಕೆಯ ಪ್ರಶ್ನೆ. ನಮ್ಮವರು ರಾಬರ್ಟ್ ರಂಥವರನ್ನು ನೋಡಿ ಕಲಿವಂಥದ್ದು ಸಾಕಷ್ಟಿದೆ.
ಮಸ್ತಕಾಭಿಷೇಕದ ದಿನದಂದು ರತ್ನಗಿರಿ ಬೆಟ್ಟದಲ್ಲಿ ಮಿಂದು ಮೊಳಗುತ್ತಿದ್ದ ಗೊಮ್ಮಟ ಒಂದು ಕಡೆ ಸಂತೋಷ ಕುಣಿದಾಡಿದಂತೆ ಕಂಡುಬರುತ್ತಿದ್ದರೆ, ಇತ್ತ ನಾನು, ವಿದೇಶದಿಂದ ಬಂದ, ಅಷ್ಟೇ ಆತ್ಮೀಯನಂತೆ ಕಂಡು ಬಂದ, ಆಕಸ್ಮಿಕವಾಗಿ ಭೇಟಿ ಮಾಡಿದ ರಾಬರ್ಟ್ ಅವರೊಂದಿಗೆ ಮಾತುಕತೆ ನಡೆಸಿ ಮನದೊಳಗೇ ಹರ್ಷಚಕಿತನಾಗಿ ನಲಿದಾಡುತ್ತಿದ್ದೆ.

Thursday, 28 February 2008

Home Alone!


Bangalore: killer city!

Safety of women in the city is going out of reach day by day

Tension for home alone ladies, murder, investigation, crime news in media with huge font have been growing to be a regular activity in silicon city.
“Subramani calling...” her mobile was ringing impatiently. Subramani was trying to call his wife Geetha however but at the result did not differ. Neither she picked the call nor did she call him back. Conceiving with the idea that she might have gone to her parents Subramani kept quite. But he was unaware that his expectation would go absolutely wrong.
She was Geetha, a 33-year-old housewife who was found strangled to death at her residence in Bangalore. Her gold ornaments were missing as were the jewelry s kept in the cupboard and Rs 9,000 cash. As her husband Subrahmani and kids were also ignorant of the fact that their mother had been killed, spent almost 4 hours playing in front of the house.
People say Bangalore is burning and to some extent it’s true. As Bangalore is becoming a terror hub, the people are getting tensed each and every day. With that the serial murders of home alone women, condition turn out to be even worse.
To the shock of Bangaloreans’ day after it happened again! Yet another home-alone woman found murdered in Bangalore. This time it was of Geethalakshmi Islur a forty years old lonely woman. She was an employee at a remand home. But as you think it was not a murder for currency and gold. Valuables in the house were untouched. As the investigations revealed her own family was involved in a civil dispute!
“It was not a murder for gain. The internal disputes with acquaintance resulted in murder. But we got clues about the killers involved in the murder, and you can expect them soon” said Bangalore South, DCP, S. Ravi to TSI.
Although this murder was not a ‘murder of gain’, it is an accepted fact that 90% of the women in the city are killed for gain! Last year Bangalore witnessed 48 women murders, 58 dowry deaths, 290 harassment cases and 62 rapes! No wonder city is big time on erroneous corridor.
“We have already taken several steps to provide safety to public and police’s are patrolling in every area of the city. ‘Hoysala’ patrol team also working hard for the safety of public” the DCP added.
But as the safety of women is going out of reach day by day the harassments, murders of home alone women are increasing at an enormous rate. The effectiveness of night patrolling has been questioned by the public as slaughters are getting their work done easily.
It is already proved Bangalore is not a safe ecstasy for women as it is developing into a most terrible city. Not only house wives even the BPO lady staff, college going girls are also becoming prey of the eve teasers and road Romeos. Bangalore records the highest number of dowry deaths in the state and unaccountable rape and eve banter. It is the time to ponder. If you still argue Bangalore is an out of harm's way city for women, you are wrong.
First it was Asha Krishnamurthy, strangled to death at her residence in Sheshadripuram on 2007 november 26th. Geetha was the 6th women got slaughted and Geethalakshmi was the 7th. In between 2007 november 26th to 21st february 2008, totally 7 home alone women murders have been taken place in the city.
The Police might have successfully caught some of the accused... But one question is left unanswered- Do those children get their Mothers back?

Wednesday, 6 February 2008

Behold Those Days.....


My friend Sunil (Now working in a TV channel) has created a Blog recently which attracted me a lot. It's really a surprising package from him to reunite those class mates, even I can say bench mates and the close ones like him. The main aim of the blog is to bring back those huge memories of college days, the funny things what all we did in those gorgeous days of Life.
The word 'memory' itself brings pleasant feeling to the mind, where one runs towards the place from where he can get flashbacks of his life. Now let me tell you the meaning of the word memory. Psychology says that Memory is a organisms ability to store, retain and subsequently retrieve the information.
Every one will have his own memory power and based on his mental power one can grasp anything deep earth. But as u know once we go back to the earlier days of life, truly it brings a light smile, a gesture of happiness, bit of cry and a slight angry too. Totally I can say that our body language will be completely different from the normal depending upon the flashback we go.
Now let me have a fast run towards flashbacks of my college days. Waaav!! I miss them a lot. I dont know whether they miss me or not. But I miss my close ones and some of my class mates, and not to forget my intimate lecturer's. Me now being alone, with no facial contacts with my friends, always tend to remember my college days, especially the final degree year, at the time I go to sleep. You see, with a free mind, its a nice time to have a journey towards the sweet heaven (so that you can get a wonderful sleep). Because the world will be sleeping (except the robbers, Lovers and some 'special' stupids) at that moment and you will be free from all the pressures, irritations, and your mind will be saying "cool man calm down, now let me to go somewhere else where you can get extra joy, happy which makes you breathe a sigh of relief". Yes, your mind says the right thing, and with no hesitation say yes to that. Yes!! your journey starts now. Take a cool breath, just start thinking your past sweet days which you spent with your friends, intimates, parents, relatives. Yes, you are entering into your own fascinating world of dreams (not excactly dreams but still we can say it as past memorable dreams). You are not aware of anything outside happenings and your body will be covered in a blanket!!
Its just a minute to take you to enter into the new world and there you will be blessed to see your same old friends talking to you, enjoying the greatest time with you and yourself being a part of whole enjoyment. See, here you can observe that in a day you will be moved into 3 dissimilar worlds. One is the world of reality, second is the world past memory and finally the world when you go to sleep. Here I can assure you that atleast 2 of them will give you bundle happiness, tremendous joys, package of relief ness and incredible delight and finally a kind of jubilation starts in your mind. I can also say it as a sort satisfaction.
Why Make A Journey To The Other Side Of The World When The World Has Come To You?"

Saturday, 27 October 2007

ಐ ರಿಯಲಿ ಲವ್ ಯು...

ಚಳಿಗಾಲದ ಒಂದು ಮುಂಜಾನೆ... ಮಬ್ಬಾದ ವಾತಾವರಣ ಇನ್ನೂ ಮನೆಮಾಡಿತ್ತು. ತಂಪಾದ ಗಾಳಿಯೂ ಬೀಸುತ್ತಿತ್ತು. ಆ ತಂಪು ನನ್ನನ್ನು ಸಂಪೂಂರ್ಣ ಆವರಿಸಿಕೊಂಡಿದ್ದರಿಂದ ಒಂದು ಹಾಟ್ ಕಾಫಿ ಕುಡಿಯೋಣವೆಂದು ಕಾಲ್ಕಿತ್ತವನೇ ಸ್ತಬ್ದನಾಗಿ ನಿಂತೆ! ಕಾಕತಾಳೀಯವೋ ಅಥವಾ ನನ್ನ ಅದೃಷ್ಟವೋ, ಹೊಟೇಲ್ ಹತ್ತಿರವಿದ್ದ ಬಸ್‌ನಿಲ್ದಾಣದಲ್ಲಿ ಆಕೆ ನಿಂತಿದ್ದಳು! ಇದುವರೆಗೆ ಅವಳ ಬಳಿ ಒಂದಕ್ಷರವೂ ಮಾತಾಡಿರಲಿಲ್ಲ. ಆದರೆ ಆ ಅಂದದ ಮೊಗದಿಂದ ಹೊರಬರುತ್ತಿದ್ದ ಒಂದು ನಗೆಯೇ ನನ್ನ ಪಾಲಿನ ಬಹುದೊಡ್ಡ ಆಸ್ತಿಯಾಗಿತ್ತು. ನನ್ನ ಬಗ್ಗೆ ಆಕೆಗೆ ಹೆಚ್ಚೇನೂ ಗೊತ್ತಿಲ್ಲದಿದ್ದರೂ ನಾನು ಆಕೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೆ. ಇದಕ್ಕೆ ಆಕೆಯ ಫ್ರೆಂಡ್ಸ್ ಸಹಾಯ ಮಾಡಿದ್ದನ್ನು ನಾನು ಖಂಡಿತಾ ಮರೆಯಲು ಸಾಧ್ಯವಿಲ್ಲ.

ಆದರೆ ಆಕೆಯನ್ನು ಅಪ್ರೋಚ್ ಮಾಡಬೇಕೆಂಬ ಬೃಹದಾಕಾರದ ಪ್ರಶ್ನೆಗೆ ಮಾತ್ರ ನನ್ನಿಂದ ಇದುವರೆಗೆ ಉತ್ತರ ಕಂಡುಕೊಳ್ಳಲಾಗೇ ಇಲ್ಲ.

ವನ್ ಸೈಡೆಡ್ ಲವ್ ಅಂದ್ರೆ ಬಹುಶಃ ಹಾಗೆ ಇರ್ಬೇಕು ಅಂತ ಅನ್ನಿಸತ್ತೆ. ಆಕೆಯನ್ನು ಮಾತಾಡಿಸಬೇಕು, ಮನಸ್ಸಿನೊಳಗೆ ಅಡಗಿ ಕುಳಿತಿದ್ದ ಭಾವನೆಗಳನ್ನು ಆಕೆಯೊಂದಿಗೆ ಹಂಚಿಕೊಳ್ಳಬೇಕೆಂದು ನಭದೆತ್ತರದಷ್ಟು ಆಸೆಯಿದ್ದರೂ...ಏನೋ ಒಂದು ತರಹದ ತಳಮಳ ನನ್ನನ್ನು ಕಾಡುತ್ತಲೇ ಇತ್ತು. ಆಕೆ ಎದುರು ನಡೆದುಕೊಂಡು ಬರುತ್ತಿದ್ದಾಗ ಕನಿಷ್ಟ ಒಂದು 'ಹಾಯ್' ಅಂತನೂ ಹೇಳಲಾಗದ ತಳಮಳ...! ಮಾತಾಡೋದೋ, ಬೇಡ್ವೋ...?

"ಅವ್ಳು ನನ್ನ ನೋಡಿದ್ರೆ ಮಾತ್ರ ಮಾತದ್ಸೋಣ. ಇಲ್ಲಂದ್ರೆ ಬೇಡ..
...ನಾನೇ ಹೋಗಿ ಮಾತಾಡಿದ್ರೆ ಅವಳು ಏನು ತಿಳ್ಕೊಳ್ತಾಳೋ ಅನ್ನೋ ಭಯ.. ಯಾಕಂದ್ರೆ ಫರ್ಸ್ಟ್ ಇಂಪ್ರೆಶ್ಶನ್ ವರ್ಸ್ಟ್ ಇಂಪ್ರೆಶ್ಶನ್ ಆಗ್ಬಾರದಲ್ವಾ"?
ನಿತ್ಯವೂ ಈ ರೀತಿಯ ಗೊಂದಲಗಳಿಂದ ಮನಸ್ಸಿಡೀ ಚಿಂತೆಗಳ ಮಹಾಸಾಗರವಾಗಿತ್ತು!

ಬಿಡಿ, ವಿಷಯಕ್ಕೆ ಬರೋಣ...
ಹೊಟೇಲ್‌ಗೆ ಹೋಗಬೇಕೆಂದಿದ್ದ ನನಗೆ ಅವಳನ್ನು ಕಂಡಾಕ್ಷಣ ಸಾವಿರ ಯೋಚನೆಗಳು ಮನಸ್ಸಲ್ಲಿ ಉದ್ಭವಿಸಲು ಆರಂಭವಾದವು. ಅಷ್ಟು ಹೊತ್ತು ಚಳಿಯಲ್ಲಿ ನಡುಗುತ್ತಿದ್ದ ಮೈ ಒಂದೇ ಸಮನೆ ಬೆವರಿ ಹೋಗಿತ್ತು!! ಹೊಟ್ಟೆಯಲ್ಲಿ ನಡುಕವೂ ಪ್ರಾರಂಭವಾಗಿತ್ತು. ಇದುವರೆಗೆ ಈ ರೀತಿಯ ತಾಕಲಾಟ ಮನಸ್ಸಿಗಾಗಿರಲಿಲ್ಲ. ಬಹುಶಃ ಆಕೆ ಬಸ್ಸಿಗಾಗಿ ಕಾದು ನಿಂತಿದ್ದಳೆಂದು ನಾನಂದುಕೊಂಡಿದ್ದೆ. ಎನೇ ಇರಲಿ, ಅವಳ ಸೌಂದರ್ಯವನ್ನು ಅನುಭವಿಸುವಂಥಾ ಮಹದವಕಾಶ ನನಗೊದಗಿಬಂದಿತ್ತು.

ಸರಿ, ಮನಸ್ಸನ್ನು ಬಿಗಿ ಮಾಡಿದೆ. ಸಣ್ಣ ಸಣ್ಣ ಹೆಜ್ಜಯಿಡಲು ಆರಂಭಿಸಿದೆ. ಅವಳನ್ನು ಇಂದು ಮಾತಾಡಿಸಲೇ ಬೇಕು ಎಂದು ಮನದೊಳಗೆ ತೀರ್ಮಾನವೂ ಮಾಡಿದೆ. ಹಾಗೇ ಹತ್ತಿರ ಹತ್ತಿರ ಬಂದದ್ದೇ ತಡ ಈ ಹಾಳಾದ ಮೊಬೈಲ್ ರಿಂಗಣಿಸಲು ಆರಂಭಿಸಿತು. ರಿಸೀವ್ ಮಾಡೊದು ಬೇಡ ಅಂದ್ರೆ ಅದು ಮನೆಯಿಂದ ಬಂದ ಕಾಲ್ ಆಗಿತ್ತು. ಓಕೆ ಎಂದು ಕಾಲ್ ರಿಸೀವ್ ಮಾಡಿ ಮಾತಾಡಲಾರಂಭಿಸಿದೆ.
... ಅಮ್ಮ!

ಎಂತ ಮಗಾ?
ಹೇಂಗಿದ್ದೆ?
ಎಲ್ಲಾ ಆರಾಮವಾ?
ಕಾರ್ಯಕ್ರಮ ಹೇಂಗಿದ್ದು?

ಏನೆಲ್ಲಾ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಪ್ರತಿಯೊಂದಕ್ಕೂ ಉತ್ತರಿಸಿ, ಮಾತಿಗೆ ವಿರಾಮ ಹಾಕಿದಾಗ ಆಗಲೇ ಮಹತ್ವದ 15 ನಿಮಿಷಗಳು ಕಳೆದುಹೋಗಿದ್ದವು! ಆಕೆಯೂ ಅಲ್ಲಿಂದ ಮಾಯವಾಗಿದ್ದಳು! ನಿಂತಲ್ಲಿಂದ ಆಕೆ ಮಾಯವಾದದ್ದು ನಂಗೆ ಅರಿವೇ ಆಗಲಿಲ್ಲ:-(

ಅಮ್ಮನೊಂದಿಗೆ ಮಾತನಾಡಿದೆ ಅನ್ನೋ ಖುಷಿ ಒಂದೆಡೆಯಾದರೆ, ಅವಳು ಹೋದಳಲ್ಲ ಅನ್ನೋ ಬೇಸರ ಇನ್ನೊಂದು ಕಡೆ.

ಕೊನೆಗೂ ಸಿಹಿ-ಕಹಿಗಳ ಮಿಶ್ರಣಗಳೊಂದಿಗೆ ಬಿಸಿ ಬಿಸಿ ಕಾಫಿ ಕುಡಿಯಲೆಂದು ಹೋಟೆಲಿಗೆ ನುಗ್ಗಿಯೇ ಬಿಟ್ಟೆ.
ಆದರೆ ಅಲ್ಲಿಯೂ ಆಕೆ ಪ್ರತ್ಯಕ್ಷವಾಗಬೇಕೆ...?

ನನ್ನ ದುರದೃಷ್ಟವೋ ಅವಳ ಅದೃಷ್ಟವೋ ನಾ ಕಾಣೆ.

ಅವಳಂದು ಇದ್ದದ್ದು ಬೇರೆ ಯಾರ ಜೊತೆಗೂ ಅಲ್ಲ ಖುದ್ದು ಆ ಹುಡುಗನ ಜೊತೆಗೇನೆ..!

ನನಗಿದು ತಡವಾಗಿ ತಿಳಿಯಿತಾದರೂ, ವಿಷಯ ತಿಳೀತಲ್ಲ ಅನ್ನೋದೆ ಸಂತೊಷ. ದಿನವಿಡಿ ಆ ಪುಣ್ಯಾತ್ಮ ಯಾರಿರಬಹುದೆಂದು ಸಾವಿರ ಭಾರಿ ಯೋಚನೆ ಮಾಡಿದ್ದೆ. ಆ ಟೈಮ್ ನಿಜವಾಗಿಯೂ ವೇಸ್ಟ್ ಆಯ್ತು.. ಆದರೂ ಪರವಾಗಿಲ್ಲ. ಜೀವನದಲ್ಲಿ ಇಂಥದ್ದೆಲ್ಲ ಇದ್ದದ್ದೇ ಎಂದು ನನ್ನ ಸ್ನೇಹಿತರು ಬೆನ್ನು ತಟ್ಟಿದರು.

ದಿನ ಕಳೆದಂತೆ ಆಕೆಯ ಮೇಲಿದ್ದ ಭಾವನೆಗಳೂಬುಡ ಕಡಿದ ಬಾಳೆ ಗಿಡದಂತೆ ಸತ್ತು ಹೋಯಿತು.

ಅಂದು ಆಕೆ ಬಸ್ಸಿಗಾಗಿ ಕಾಯುತ್ತಿದ್ದಳೇನೋ ಎಂದು ನಾನಂದುಕೊಂಡಿದ್ದು ಸುಳ್ಳಾಯ್ತು... ತನ್ನ ಪ್ರೇಮಿಗಾಗಿ ಕಾದಿದ್ದ ಆಕೆ ಹೋಟೆಲ್‌ನಿಂದ ಹೊರಟವಳೇ ಆತನ ಬೈಕ್‌ನಲ್ಲಿ ಕುಳಿತು ಎರಡು ಭುಜಗಳನ್ನೂ ಹಿಡಿದಾಗಲಂತೂ.... ಏನು ಹೇಳಬೇಕೆಂದು ನನಗೆ ತೋಚುತ್ತಿಲ್ಲ... ನಾನೇ ಇಂಗು ತಿಂದ ಮಂಗನಾದೆ ಅಷ್ಟೇ.

ಒಂದು ರೀತಿಯಲ್ಲಿ ಅಂದು ಅಮ್ಮ ಫೋನ್ ಮಾಡಿದ್ದು ಒಳೆಯದೇ ಆಗಿತ್ತು. ಆದರೆ ಮಾಯಾಜಿಂಕೆಯಂತಿದ್ದ ಆಕೆಯ ಬಳಿ ಮಾತಾಡಲಾಗಲಿಲ್ಲವೆಂದು ಅಮ್ಮನಿಗೆ ಹಿಡಿ ಶಾಪ ಹಾಕಿದ್ದೆ.

I am so sorry.... ರಿಯಲಿ ಐ ಲವ್ ಯು ಅಮ್ಮ....

Friday, 24 August 2007

ಕರುಣಾಜನಕ ಕಥೆ ಹೇಳುವ
ಬಾಸುಂಡೆ ಗುರುತು...
.
ಕೆಲಸ ದೊರೆಯಿತು ಎಂದು ನಗುಮುಖದಿಂದ ಅರಬ್ ದೇಶಗಳಿಗೆ ತೆರಳುವವರಲ್ಲಿ ಎಷ್ಟು ಮಂದಿ ನಗುಮುಖದಿಂದಲೇ ದುಡಿಯುತ್ತಿದ್ದಾರೆ? ಮೂಲಗಳ ಪ್ರಕಾರ ಅಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಯಾತನೆಯೇ ದಿನನಿತ್ಯದ ಸಂಗಾತಿ!

ಮಧ್ಯಾಹ್ನ 12 ಗಂಟೆ. ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ. ದುಬೈಯಿಂದ ಆಗಮಿಸಿದ ವಿಮಾನವೊಂದರಿಂದ ಇಳಿದ ಪ್ರಯಾಣಿಕರೆಲ್ಲರೂ ತಮ್ಮ ಗುರಿಯತ್ತ ಹೆಜ್ಜೆ ಹಾಕಿದರು. ಆದರೆ, ಅದೇ ವಿಮಾನದಲ್ಲಿ ಅರೆ ಜೀವಾವಸ್ಥೆಯಲ್ಲಿದ್ದು ಗಾಲಿ ಕುರ್ಚಿಯ ಮೇಲೆ ಕುಳಿತು, ತೀರಾ ಕುಗ್ಗಿ ಹೋಗಿದ್ದ ಮಹಿಳೆಯೊಬ್ಬರು ಅಲ್ಲಿನ ಕಸ್ಟಮ್ಸ್ ಅಧಿಕಾರಿ ಆನ್ಸೆಂಟ್ ಥಾಮಸ್ ಬಳಿ ಬಂದು 'ಸಾರ್ ನನಗೆ ನಡೆಯಲೂ ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತೀರಾ?' ಎಂದು ಗೋಗರೆದಳು. ಆಕೆಯ ಮೈ-ಕೈ ಮೇಲೆಲ್ಲಾ ಎದ್ದು ಕಾಣುತ್ತಿದ್ದ ಸುಟ್ಟ ಗಾಯಗಳು-ಬಾಸುಂಡೆಗಳನ್ನು ಕಂಡ ಥಾಮಸ್ ಕೂಡಲೇ ಕಾರ್ಯ ಪ್ರವೃತ್ತರಾದರು. ಮುರುಟಿ ಹೋಗಿದ್ದ ಆ ಜೀವ ಮುಂಬೈನ ಹೋಲಿ ಸ್ಪಿರಿಟ್ ಆಸ್ಪತ್ರೆ ಸೇರಿತು.
ಇದು ಯಾವುದೋ ಒಂದು ಸಿನೆಮಾದ ದೃಶ್ಯ ಎಂದುಕೊಂಡಿರಾ? ಖಂಡಿತ ಅಲ್ಲ. ಇದೊಂದು ಜೀವಂತ 'ಚಿತ್ರಕಥೆ'. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಎಂಬ ಊರಿನ ಸುಮತಿ ಕ್ರಿಸ್ತಾಬೆಲ್ ಕೋಟ್ಯಾನ್ ಅವರ ಜೀವನದ ದುರಂತ ಕಥೆ. ಅಬುಧಾಬಿಯಲ್ಲಿ ನೆಲೆಸಿರುವ ಉಡುಪಿ ಮೂಲದ ದೀಪಕ್ ಲೂಯಿಸ್ ಹಾಗೂ ಸರಿತಾ ಲೂಯಿಸ್‌ರ ಮನೆಯಲ್ಲಿ ಕೆಲಸದ ಆಳಾಗಿ ಸೇರಿ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆಯನ್ನು ಅನುಭವಿಸಿ ಜೀವನದ ಕರಾಳ ದಿನಗಳನ್ನು ಕಂಡ ಸುಮತಿ ಕೋಟ್ಯಾನ್ ಅವರ ನೊಂದ ಜೀವನದ ವಾಸ್ತವ ಸತ್ಯ.
ಬಹುಶಃ ಸುಮತಿ ಕೋಟ್ಯಾನ್ ಅವರ ಕಥೆ ಕರಾವಳಿಯಲ್ಲಿ ಈಗ ಜನಜನಿತ. ಆದರೆ ಆ ಕಥೆಯ ಮುಂದಿನ ಭಾಗ ಮಾತ್ರ ಹೆಚ್ಚಿನವರಿಗೆ ಗೊತ್ತಿಲ್ಲ. ಬನ್ನಿ, ಭೂತದ ಮೇಲೊಂದು ಕಿರು ನೋಟ ಹರಿಸೋಣ. ಸುಮತಿ ದಂಪತಿಗೆ ಒಬ್ಬ ಮಗ. ಆತನನ್ನು ಓದಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂಬುದೇ ಅವರ ಮಹದುದ್ದೇಶ. ಆದರೆ ಅತಿಯಾದ ಬಡತನ ಹಾಗೂ ದಾರಿದ್ರ್ಯ ಸುಮತಿ ಅವರನ್ನು ದುಡಿಯಲು ತೆರಳುವಂತೆ ಪ್ರೇರೇಪಿಸಿತು. ಸುಮತಿ ಹೇಳುವ ಪ್ರಕಾರ ಉಡುಪಿ ಮೂಲದ ಲೂಯಿಸ್ ದಂಪತಿಗಳಿಗೆ ಮೊದಲಿನಿಂದಲೇ ಆಕೆಯ ಪರಿಚಯವಿತ್ತು. ಆದ ಕಾರಣ ದುಬೈನಲ್ಲಿ ನೆಲೆಸಿರುವ ಲೂಯಿಸ್ ದಂಪತಿಗಳು ಸುಮತಿ ಅವರನ್ನು ತಮ್ಮ ಮನೆಕೆಲಸದಾಕೆಯಾಗಿ ನೇಮಿಸಿದರು.
ಆದರೆ ಮುಂದೆ ನಡೆದದ್ದೇ ಬೇರೆ. ಸುಮತಿಯನ್ನು ಪ್ರಾಣಿಗಿಂತ ಕಡೆಯಾಗಿ ಕಂಡು ಚಿತ್ರಹಿಂಸೆ ನೀಡಲು ಶುರುಮಾಡಿದ ಲೂಯಿಸ್ ದಂಪತಿಗಳು ಆಕೆ ಏನೇ ಮಾಡಿದರೂ ಅದರಲ್ಲಿ ಕೊಂಕು ಹುಡುಕಲಾರಂಭಿಸಿದರು. ಬಾಸುಂಡೆ ಬರುವಂತೆ ಹೊಡೆದು ಇಸ್ತ್ರಿ ಪೆಟ್ಟಿಗೆಯನ್ನು ಬೆನ್ನಿನ ಮೇಲಿಟ್ಟು ಕ್ರೂರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಚಿತ್ರಹಿಂಸೆಯ ಪರಮಾವಧಿಗೆ ಸುಮತಿ ಅವರ ಬೆನ್ನೇ ಸಾಕ್ಷಿ. ಆ ಸುಟ್ಟ ಗಾಯಗಳು, ಸೋತು ಸುಣ್ಣವಾದ ಮುಖ, ಶಿಥಿಲಗೊಂಡ ದೇಹವೇ ಆಕೆಯ ದುರಂತ ಕಥೆಯ ಒಂದೊಂದು ಸಾಲನ್ನೂ ಹೇಳುತ್ತವೆ.
ದುಬೈಗೆ ಹೋಗುವ ಮುನ್ನ ಸುಮತಿಗೆ ತಿಂಗಳಿಗೆ ೮,೦೦೦ ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡಲಾಗಿತ್ತಂತೆ. ಆದರೆ, ನಂತರ ದೊರಕಿದ್ದು ಬೇಕಾದಷ್ಟು ಹಿಂಸೆ ಹಾಗೂ ತಿಂಗಳಿಗೆ ರೂ. ೬,೦೦೦ ಸಂಬಳ ಮಾತ್ರ. ಸುಮತಿ ಹೇಳುವ ಪ್ರಕಾರ ಲೂಯಿಸ್ ದಂಪತಿ ಈ ವಿಕೃತ 'ಸಂಪ್ರದಾಯ'ವನ್ನು ಹಲವಾರು ತಿಂಗಳಿಂದ ನಡೆಸಿಕೊಂಡು ಬಂದಿದ್ದಾರೆ.
ಸುಮತಿ ಕೋಟ್ಯಾನ್ ಅವರ ಪ್ರತಿ ಹೇಳಿಕೆಯನ್ನೂ ಅಲ್ಲಗಳೆಯುವ ಲೂಯಿಸ್ ದಂಪತಿ 'ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ' ಎನ್ನುತ್ತಾರೆ. ಸುಮತಿ ಅವರ ಮಾತುಗಳನ್ನೆಲ್ಲಾ 'ಸುಳ್ಳು' ಎಂದು ಹೇಳುವ ಲೂಯಿಸ್ ದಂಪತಿ ಪ್ರಕರಣಕ್ಕೆ ಅಂದೇ ತಿರುವು ನೀಡಿದ್ದರು. ಒಂದು ವೇಳೆ ಸುಮತಿ ಅವರು ಹೇಳಿರುವುದೆಲ್ಲಾ ಸುಳ್ಳೇ ಆಗಿದ್ದರೆ ಆಕೆ ಈ ನರಕಯಾತನೆಯನ್ನು ಯಾರಿಂದ ಯಾಕಾಗಿ ಅನುಭವಿಸಿದಳು ಎಂಬ ಪ್ರಶ್ನೆ ಮೂಡುವುದು ಸಹಜ.
ಊರಿನ ಕೆಲವರು, 'ಮೃದು ಸ್ವಭಾವದ ಸುಮತಿಗೆ ಊರಿನಲ್ಲಿ ಯಾರೊಂದಿಗೂ ವೈರತ್ವವಿರಲಿಲ್ಲ. ಆಕೆಯೂ ಯಾರೊಂದಿಗೂ ಕೆಟ್ಟ ರೀತಿಯಲ್ಲಿ ವರ್ತಿಸಿರಲಿಲ್ಲ. ಇನ್ನು ಅಬುಧಾಬಿಗೆ ಹೋಗಿ ಬೇರೆಯವರೊಂದಿಗೆ ವೈರತ್ವ ಸಾಧಿಸುವುದೆಂದರೆ ನಂಬಲಸಾಧ್ಯ. ದುಡ್ಡಿನ ಮದವಿರುವ ಲೂಯಿಸ್ ದಂಪತಿಗಳೇ ಏನೋ ಹುನ್ನಾರ ನಡೆಸಿದ್ದಾರೆ' ಎಂಬುದಾಗಿ ಹೇಳುತ್ತಾರೆ.
ಈ ನಡುವೆ ಸುಮತಿ ದಂಪತಿ ಲೂಯಿಸ್ ದಂಪತಿ ವಿರುದ್ಧ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ತಮಗೆ ನ್ಯಾಯ ಒದಗಿಸುವಂತೆ ಕಾನೂನಿನ ಮೊರೆ ಹೋಗಿದ್ದಾರೆ. ಇತ್ತೀಚಿಗೆ ಕಾರ್ಕಳದ ಪೊಲೀಸರು ಶಿರ್ವಾ ಮಂಚಕಲ್ ಪಿಲಾರ್‌ಕಾನಾದ ಸರಿತಾ ಲೂಯಿಸ್ ಮನೆಗೆ ತೆರಳಿ ಪಡಿತರ ಚೀಟಿಯನ್ನು ಪರಿಶೀಲಿಸಿದಾಗ ಸರಿತಾಳ ಹೆಸರು ಇಲ್ಲದಿರುವುದು ಗಮನಕ್ಕೆ ಬಂದಿದೆ. ಪೋಲಿಸರ ಹೇಳಿಕೆಯಂತೆ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿದ್ದರೆ ಭಾರತೀಯ ಪ್ರಜೆಯಾಗಿ ಪ್ರಕರಣ ಮುನ್ನಡೆಸಲು ಅಸಾಧ್ಯ. ಇನ್ನು ಸರಿತಾ ಲೂಯಿಸ್ ಭಾರತೀಯ ಪ್ರಜೆಯಲ್ಲ ಎಂದಾದರೆ ಆಕೆಗೆ ಪಾಸ್‌ಪೋರ್ಟ್‌ಗಾಗಿ ಪಿಸಿಸಿ ಎಲ್ಲಿಂದ ದೊರೆಯಿತು...? ಸರಿತಾ ಲೂಯಿಸ್ ಬಳಿ ಯಾವ ದೇಶದ ಪಾಸ್‌ಪೋರ್ಟ್ ಇದೆ? ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಆಕೆಯ ಊರಿನವರು ಸರಿತಾ ಶಿರ್ವಾ ಮಂಚಕಲ್‌ನಲ್ಲೇ ಹುಟ್ಟಿ ಬೆಳೆದವರು ಎಂದು ಹೇಳುತ್ತಾರೆ.
ಸತತವಾಗಿ ಆರು ತಿಂಗಳುಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸುಮತಿ ದಂಪತಿಗೆ ಈ ಬೆಳವಣಿಗೆ ಮತ್ತಷ್ಟು ನೋವನ್ನುಂಟು ಮಾಡಿದೆ. ಈಗಾಗಲೇ ಸಾಕಷ್ಟು ನೊಂದಿರುವ ಈ ಬಡ ಜೀವಗಳ ಭವಿಷ್ಯವೇನು?
ಸದ್ಯ ಕಾರ್ಕಳದಲ್ಲಿ ನೆಲೆಸಿರುವ ಸುಮತಿ ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಬೆನ್ನಿನಲ್ಲಿರುವ ಸುಟ್ಟಗಾಯದ ನೋವುಗಳು ಇನ್ನೂ ಮಾಸಿಲ್ಲ. ಮಲ್ಲಿಗೆ ಕಟ್ಟಿ ಅದರಿಂದ ಬರುವ ಕೂಲಿಯೇ ಅವರ ಜೀವನಕ್ಕೆ
ಆಧಾರ. ಗಂಡ ಜೇಸುದಾಸ್ ಕೋಟ್ಯಾನ್ ಮಲ್ಲಿಗೆ ಕಟ್ಟುವುದರೊಂದಿಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದಾರೆ. ಅದಲ್ಲದೇ ಮನೆಯಲ್ಲಿ ಸೂಕ್ತವಾದ ವಿದ್ಯುತ್ ವ್ಯವಸ್ಥೆಯೂ ಇಲ್ಲ. ಇನ್ನು ಕೆಲವು ಅಗತ್ಯ ಸಂದರ್ಭಗಳಲ್ಲಿ ನರೆಮನೆಯವರು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ.
ಈ ನಡುವೆ ಸುಮತಿ ಅವರಿಗೆ ನ್ಯಾಯದೊರಕಿಸಿ ಕೊಡಲು ಮುಂಬೈನಲ್ಲಿರುವ ಫೆಡರೇಶನ್ ಆಫ್ ಮಹಾರಾಷ್ಟ್ರಾಸ್ ಕೆನರಾ ಕೆಥೋಲಿಕ್ ಅಸೋಸಿಯೇಷನ್‌ನ ಸಂಚಾಲಕರಾಗಿರುವ ರೋನ್ಸ್ ಬಂಟ್ವಾಳ್, ಜಾಗೃತಾ ಮತ್ತು ಭ್ರಷ್ಟಾಚಾರ ಪತ್ತೆ, ನಿರ್ಮೂಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಅಪರಾಧ ಪ್ರತಿಬಂಧಕ ಸಂಸ್ಥೆಯ ಅಂತರ್ ರಾಷ್ಟ್ರೀಯ ಕಾರ್ಯದರ್ಶಿ ರೋಲ್ಯಾಂಡ್ ಟಿ. ಸ್ಟಾಲಿನ್ ಸೇರಿದಂತೆ ಹಲವರು ಪ್ರಯತ್ನ ನಡೆಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರೋನ್ಸ್ ಬಂಟ್ವಾಳ್, "ಸುಮತಿ ಅವರು ಭಾರತಕ್ಕೆ ಆಗಮಿಸಿ ಈಗಾಗಲೇ ಆರು ತಿಂಗಳು ಕಳೆದಿದೆ. ಆದರೆ ಪ್ರಕರಣ ಯಾವುದೇ ಬದಲಾವಣೆ ಕಂಡಿಲ್ಲ. ಈ ನಿಟ್ಟಿನಲ್ಲಿ ಸುಮತಿ ಅವರ ಪರ ಹೋರಾಡಲು ಇತರ ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ. ಆದ್ದರಿಂದ ಕಾರ್ಕಳದಲ್ಲಿ ನಾವು ಸುಮತಿ ಅವರೊಂದಿಗೆ ಸದ್ಯದಲ್ಲೇ ಪ್ರತಿಭಟನೆಯನ್ನು ನಡೆಸಲಿದ್ದೇವೆ" ಎಂದು ತಿಳಿಸಿದ್ದಾರೆ.
ಏನೇ ಇರಲಿ, ನ್ಯಾಯದೇವತೆ ಇನ್ನೂ ಇವರಿಂದ ಬಹು ದೂರ ನಿಂತು ಆಟವಾಡಿಸುತ್ತಲೇ ಇದ್ದಾಳೆ.
ಅರಬ್ ದೇಶಗಳಲ್ಲಿ ಇದು ಮಾಮೂಲಿ ಕಥೆ!

ಇಂದು ಮಸ್ಕತ್, ಕುವೈಟ್, ದುಬೈ ಹಾಗೂ ಅಬುಧಾಬಿ ಸೇರಿದಂತೆ ಇನ್ನಿತರ ಗಲ್ಫ್ದೇಶಗಳಿಗೆ ತೆರಳಿ ದುಡಿಯುತ್ತಿರುವ ಕರಾವಳಿಯ ಮಂದಿ ಅನೇಕರಿದ್ದಾರೆ. ಈ ಬಗ್ಗೆ ತಿಳಿದಿರುವ ಮುಂಬೈ ಮೂಲದ ವ್ಯಕ್ತಿಯೊಬ್ಬರ ಪ್ರಕಾರ ಗಲ್ಫ್ದೇಶಗಳಲ್ಲಿರುವ ಕರಾವಳಿಗರ ಸಂಖ್ಯೆ ಸುಮಾರುಮೂರು ಲಕ್ಷ! ಮತ್ತೊಂದು ಕುತೂಹಲಕರ ಅಂಶವೆಂದರೆ ಇವರಲ್ಲಿ ಬಹಳಷ್ಟು ಮಂದಿ ಅನಧಿಕೃತವಾಗಿ ಬಂದುನೆಲೆಸಿದವರು!ಒಟ್ಟಾರೆ ಕರ್ನಾಟಕದಿಂದ ಗಲ್ಫ್ ದೇಶಗಳಿಗೆ ಕೆಲಸಕ್ಕೆಂದು ತೆರಳಿ ಮನೆಕೆಲಸದ ಆಳಾಗಿ ದುಡಿಯುತ್ತಿರುವ ಮಹಿಳೆಯರು ಅನೇಕರಿದ್ದು ಸುಮತಿ ಅವರಂತೆ ಇವರೂ ಹಿಂಸೆ ಅನುಭವಿಸುತ್ತಿದ್ದಾರೆ.ಈ ಬಗ್ಗೆ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಟಿಎಸ್‌ಐ ಜೊತೆ ಮಾತನಾಡಿ, “ಗಲ್ಫ್ ದೇಶದಲ್ಲಿರುವರಾಜ್ಯದ ಜನರ ಕೂಗು ಮುಗಿಲೆತ್ತರಕ್ಕೆ ಸಾಗಿದೆ.ರಾಜ್ಯದ ಕೆಲವು ಮಹಿಳೆಯರು ಅತ್ಯಾಚಾರಕ್ಕೂಒಳಗಾಗಿದ್ದಾರೆ. ಆದರೆ ಭವಿಷ್ಯದ ದೃಷ್ಟಿಯಿಂದ ಈ ವಿಷಯವನ್ನು ಅವರು ಯಾರಲ್ಲೂ ಬಹಿರಂಗಪಡಿಸಿಲ್ಲ. ಅದಲ್ಲದೇ ಪೊಲೀಸರಲ್ಲೂ ಈ ಬಗ್ಗೆದೂರನ್ನು ನೀಡುತ್ತಿಲ್ಲ” ಎಂದು ಹೇಳುತ್ತಾರೆ. ಹಾಗೆಯೇ ಇಂತಹ ಪರಿಸ್ಥಿತಿಯ ಅರಿವಿರುವಅಬುಧಾಬಿಯ ಇನ್ನೊಬ್ಬರು “ನಿಮಗೆ ಈ ಒಂದು ಪ್ರಕರಣ ಬಹುದೊಡ್ಡದೆಂದು ಅನಿಸಬಹುದು. ಆದರೆ ಅರಬ್ದೇಶಗಳಲ್ಲಿ ಇವೆಲ್ಲ ಸಾಮಾನ್ಯ. ಇಲ್ಲಿನ ಶ್ರೀಮಂತರ ಮನೆಯಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಒಂದೊಂದು ಗೋಳಿನ ಕಥೆಯಿದೆ. ಯಾವುದೇ ರಕ್ಷಣೆ ಪಡೆಯದ ಈ ಮಹಿಳೆಯರಿಗೆ ಔಷಧಿಯ ಖರ್ಚು ಕೂಡಾ ಮನೆಯವರಿಂದ ಸಿಗುತ್ತಿಲ್ಲ” ಎನ್ನುತ್ತಾರೆ. ಹಾಗಿದ್ದರೆ ಬಡವರು ಜೀವನ ಸಾಗಿಸುವುದು ಸಿರಿವಂತರಿಂದ ಶೋಷಣೆಗೆ ಒಳಗಾಗುವ ಸಲುವಾಗಿಯೇ, ಇದಕ್ಕೆಲ್ಲಾ ಕೊನೆ ಎಂದು?

ಮೌನದ ಮಾತು - ಈ ಬ್ಲಾಗು ನನಗ್ಯಾಕೆ?



ಮನದಾಳದಿಂದ ಆವರಿಸುವ ಮೌನದ ಮಾತುಗಳು ಒಂದೇ ಎರಡೇ? ಅಯ್ಯೋ.. ಸಾವಿರಾರು ನೆನಪುಗಳು, ಕೋಟಿ ಭಾವನೆಗಳು, ಲೆಕ್ಕವಿಲ್ಲದಷ್ಟು ಕನಸುಗಳು... ಹೀಗೆ ಇವೆಲ್ಲವೂ ಸದಾ ಮನದಲ್ಲಿ ತಮ್ಮ ಪ್ರಯಾಣ ಮಾಡುತ್ತಲೇ ಇರುತ್ತವೆ. ಅವುಗಳನ್ನು ನಾನಿಲ್ಲಿ ಅಭಿವ್ಯಕ್ತ ಪಡಿಸಿದರೆ ಏನೋ ನನ್ನ ಮನಸ್ಸೆಂಬ ಸಾಗರಕ್ಕೆ ನೆಮ್ಮದಿಯಾಗಬಹುದು ಎಂಬ ಆಶಯದಿಂದ ಈ ಬ್ಲಾಗನ್ನು ನಾನು ಆರಂಭಿಸುತ್ತಿದ್ದೇನೆ.
ಸ್ನೇಹಿತರೇ ನೀವು ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ. ನಿಮ್ಮ ಯಾವುದೇ comments ಇದ್ದರೂ ಇಲ್ಲಿ ವ್ಯಕ್ತಪಡಿಸಿ.




ಇತೀ ನಿಮ್ಮವ,
ರಾಘವ ಶರ್ಮ
ನವದೆಹಲಿ